ಡಿಸೆಂಬರ್ 6: ‘ನಮ್ಮನೆ ಹಬ್ಬ’ ಸಂಭ್ರಮ
“ನಮ್ಮನೆ ಹಬ್ಬಕ್ಕೆ ಈ ಬಾರಿ 14ರ ಸಂಭ್ರಮ. ಎಲ್ಲರೂ ಒಂದೇ ಮನೆಯವರಂತೆ ಸಾಂಸ್ಕೃತಿಕ ದಿಬ್ಬಣದಲ್ಲಿ ಸೇರಿ ಸಂಭ್ರಮಿಸುವುದೇ ನಮ್ಮ ಆಶಯ. ಬಂದ ಎಲ್ಲರಿಗೂ ಇದು ‘ನಮ್ಮನೆ ಹಬ್ಬ’ — ಮನಸ್ಸು ಕಟ್ಟುವ ಹಬ್ಬ.” - ಕವಯತ್ರಿ ಗಾಯತ್ರೀ ರಾಘವೇಂದ್ರ
🎉 14ನೇ ವರ್ಷದ ‘ನಮ್ಮನೆ ಹಬ್ಬ’ – ವಿಶೇಷತೆಗಳು
-
⏱️ ಸಮಯಪಾಲನೆಗೆ ಆದ್ಯತೆ ಪಡೆದ ಹಬ್ಬ
-
🎶 ಶ್ರೀ ಶ್ರೀಧರರ ಭಜನಾಮೃತ ಗಾಯನ
-
🎭 ತುಳಸಿ ಹೆಗಡೆ ಪ್ರಸ್ತುತಿಯ ನೂತನ ರೂಪಕ ‘ವಂದೇ ಗೋವಿಂದಮ್’ ಲೋಕಾರ್ಪಣೆ
-
🎬 ದೊಡ್ಡಣ್ಣ – ಬಿ. ಜಯಶ್ರೀ ಅಭಿನಯ ಲೋಕದ ಅತಿಥಿಗಳು
-
🏡 ಹಳ್ಳಿ ಮನೆ ಅಂಗಳದಂತೆ ಎಲ್ಲರಿಗೂ ಸೇರುವ ಸಾಂಸ್ಕೃತಿಕ ಮಿಲನ
-
🌾 ನೆಲಮೂಲದ ಸಂಸ್ಕೃತಿ ಪ್ರತಿಬಿಂಬಿಸುವ ದಿಬ್ಬಣ
****
ಚಿತ್ರನಟ ದೊಡ್ಡಣ್ಣ ಚಾಲನೆ; ‘ವಂದೇ ಗೋವಿಂದಮ್’ ಯಕ್ಷ ರೂಪಕ ಲೋಕಾರ್ಪಣೆ
****
ಆಪ್ತ ನ್ಯೂಸ್ ಶಿರಸಿ:
ರಾಜ್ಯದ ವಿಶಿಷ್ಟತೆಯನ್ನು ತೋರುವ ನಮ್ಮನೆ ಹಬ್ಬ ಈ ಬಾರಿ ಡಿಸೆಂಬರ್ 6, ಶನಿವಾರ ಸಂಜೆ 5 ಗಂಟೆಯಿಂದ, ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ಭವ್ಯವಾಗಿ ನೆರವೇರಲಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್ ಆಯೋಜಿಸಿರುವ ಈ ಹಬ್ಬದಲ್ಲಿ ಸಾಂಸ್ಕೃತಿಕ ವೈವಿಧ್ಯ, ಯಕ್ಷಗಾನ ನೃತ್ಯ ರೂಪಕ, ಭಜನಾಂಜಲಿ, ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಜರುಗಲಿವೆ.
ಭಜನಾಮೃತ
ಸಂಜೆ 5 ಗಂಟೆಗೆ ಶ್ರೀ ಶ್ರೀಧರರ ‘ಭಜನಾಮೃತ’ ಕಾರ್ಯಕ್ರಮದಿಂದ ಸಂಭ್ರಮಕ್ಕೆ ಚಾಲನೆ ಸಿಗಲಿದೆ. ಪ್ರಸಿದ್ಧ ಗಾಯಕ ವಿಶ್ವೇಶ್ವರ ಖರ್ವಾ ಭಜನೆ ಸಲ್ಲಿಸಲಿದ್ದು,
ಗುರುರಾಜ ಆಡುಕಳ (ತಬಲಾ) ಮತ್ತು ಅಜಯ್ ವರ್ಗಾಸ್ (ಹಾರ್ಮೋನಿಯಂ) ಸಂಗೀತ ಸಹಕಾರ ನೀಡಲಿದ್ದಾರೆ.
‘ವಂದೇ ಗೋವಿಂದಮ್’ — ನೂತನ ಯಕ್ಷ ರೂಪಕ ಲೋಕಾರ್ಪಣೆ
ಸಂಜೆ 6.05ಕ್ಕೆ ಗೋವುಗಳ ಮಹತ್ವ ಸಾರುವ ಕಥಾಭಾಗ ಒಳಗೊಂಡ, ವಿಶ್ವಶಾಂತಿ ಸರಣಿಯ 11ನೇ ನೂತನ ಯಕ್ಷ ನೃತ್ಯ ರೂಪಕ ‘ವಂದೇ ಗೋವಿಂದಮ್’ ಮೊದಲ ಪ್ರದರ್ಶನದ ಮೂಲಕ ಲೋಕಾರ್ಪಣೆಯಾಗಲಿದೆ.
ಈ ರೂಪಕಕ್ಕೆ—
-
ಕಥೆ: ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ವಸಂತ ಭಾರಧ್ವಾಜ
-
ಪ್ರಸ್ತುತಿ: ದಾಖಲೆ ಸಾಧನೆಗೈದ ಯುವ ಯಕ್ಷಗಾನ ಕಲಾವಿದೆ ಕು. ತುಳಸಿ ಹೆಗಡೆ
-
ಮೂಲ ಕಲ್ಪನೆ: ಚಿಂತಕ ರಮೇಶ್ ಹೆಗಡೆ ಹಳೆಕಾನಗೋಡು
-
ನೃತ್ಯ ನಿರ್ದೇಶನ: ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ
-
ಗದ್ಯ ಸಾಹಿತ್ಯ: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ
-
ಹಿನ್ನೆಲೆ ಧ್ವನಿ: ಡಾ. ಶ್ರೀಪಾದ ಭಟ್
-
ತಾಳಾಭ್ಯಾಸ: ಜಿ.ಎಸ್. ಭಟ್
-
ಧ್ವನಿ ಗ್ರಹಣ: ಉದಯ ಪೂರಾರಿ
ರಂಗಭೂಮಿಯಲ್ಲಿ—
-
ಭಾಗವತ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಳಗಿ ಕೇಶವ ಹೆಗಡೆ
-
ಮದ್ದಲೆ: ಶಂಕರ ಭಾಗವತ (ಯಲ್ಲಾಪುರ)
-
ಚಂಡೆ: ವಿಘ್ನೇಶ್ವರ ಗೌಡ (ಕೆಸರಕೊಪ್ಪ)
-
ಪ್ರಸಾಧನ: ವೆಂಕಟೇಶ ಬೊಗ್ರಿಮಕ್ಕಿ
ಪ್ರಶಸ್ತಿ ಪ್ರದಾನ – ಸನ್ಮಾನ ಸಂಭ್ರಮ
ಸಂಜೆ 7.25ಕ್ಕೆ ನಮ್ಮನೆ ಹಬ್ಬದ ಅಧಿಕೃತ ಉದ್ಘಾಟನೆ, ದಿನದರ್ಶಿಕೆ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಸಿದ್ಧ ಚಿತ್ರ ನಟ ಎಸ್. ದೊಡ್ಡಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸನ್ಮಾನಗಳು ಮಾಡಲಿದ್ದಾರೆ.
ಈ ವರ್ಷ ನೀಡಲಿರುವ ಪ್ರಶಸ್ತಿಗಳು—
-
ನಮ್ಮನೆ ಪ್ರಶಸ್ತಿ: ಹಿರಿಯ ರಂಗಕಲಾವಿದೆ ಬಿ. ಜಯಶ್ರೀ
-
ನಮ್ಮನೆ ಪ್ರಶಸ್ತಿ: ವೈದ್ಯಕೀಯ–ರಾಸಾಯನಿಕ ಸಂಶೋಧನೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ರಾಮನಂದ ಹೆಗಡೆ
-
ನಮ್ಮನೆ ಕಿಶೋರ್ ಪುರಸ್ಕಾರ: ಯುವ ಪ್ರತಿಭೆ ತೆಜಸ್ವಿ ಗಾಂವಕರ
ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯದರ್ಶಿ, ಕವಯಿತ್ರಿ ಗಾಯತ್ರೀ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



