ಶಿಕ್ಷಕಿ ಪ್ರೇಮಾವತಿ ಕೃಷ್ಣ ಭಟ್ಟರಿಗೆ  ಶಿಕ್ಷಕ ರತ್ನ ರಾಜ್ಯಪ್ರಶಸ್ತಿ

Oct 28, 2025 - 11:00
 0  32
ಶಿಕ್ಷಕಿ ಪ್ರೇಮಾವತಿ ಕೃಷ್ಣ ಭಟ್ಟರಿಗೆ  ಶಿಕ್ಷಕ ರತ್ನ ರಾಜ್ಯಪ್ರಶಸ್ತಿ

ಆಪ್ತ ನ್ಯೂಸ್ ಯಲ್ಲಾಪುರ:

ಮಂಗಳೂರಿನ ಕಥಾ ಬಿಂದು ಪ್ರಕಾಶನ ಕೊಡುವ ರಾಜ್ಯಮಟ್ಟದ ಶಿಕ್ಷಕ ರತ್ನ ರಾಜ್ಯಪ್ರಶಸ್ತಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನಗೋಡದ ಶಿಕ್ಷಕಿ ಪ್ರೇಮಾವತಿ ಕೃಷ್ಣ ಭಟ್ಟ ಇವರಿಗೆ ಲಭಿಸಿದೆ.
27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು ಮಕ್ಕಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರಲ್ಲದೇ, ಪ್ರತಿಭಾ ಕಾರಂಜಿ ದೇಶಭಕ್ತಿಗೀತೆ ಮತ್ತು ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿಯೂ ವಿಜೇತರಾಗಲು ಮಕ್ಕಳಿಗೆ ಮಾರ್ಗದರ್ಶನ ನೀಡಿ ಕಾರಣರಾಗಿದ್ದಾರೆ. ಅಲ್ಲದೇ ನಲಿ-ಕಲಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ ಪಡೆದವರಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0