ಶಿರಸಿಯಲ್ಲಿ ಅಂತರಂಗದಾಮೃದಂಗ ಕೃತಿ ಪರಿಚಯ
ಆಪ್ತ ನ್ಯೂಸ್ ಶಿರಸಿ:
ನಯನಾ ಫೌಂಡೇಶನ್ ಶಿರಸಿ, ಶ್ರೀ ಎಮ್.ಎಮ್ ಜೋಶಿ ಗಣೇಶ ನೇತ್ರಾಲಯ ಹಾಗೂ ಗಾಯತ್ರಿ ಗೆಳೆಯರ ಬಳಗ ಶಿರಸಿ ಇವರ ಸಹಯೋಗದೊಂದಿಗೆ ನವೆಂಬರ್ 01ರಂದು ಶನಿವಾರ ಅಪರಾಹ್ನ 3:00 ಗಂಟೆಗೆ ಗಣೇಶ ನೇತ್ರಾಲಯ ನಯನ ಸಭಾಂಗಣ, ದೇವಿಕೆರೆ ರಸ್ತೆ ಶಿರಸಿ ಇಲ್ಲಿ ಪುಸ್ತಕಾವಲೋಕನ ಮತ್ತು ನಾಡ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ,
ರಮೇಶ ಹೆಗಡೆ ಕೆರೆಕೋಣ, ಶಿಕ್ಷಕರು, ತೆರಕನಹಳ್ಳಿ ಇವರ ಕೃತಿ – ಅಂತರಂಗದಾಮೃದಂಗ (ಕವನ ಸಂಕಲನ) ಈ ಕೃತಿಯನ್ನು ಭವ್ಯಾ ಹೆಗಡೆ ಹಳೆಯೂರು, ಉಪನ್ಯಾಸಕಿ ಮಾರಿಕಾಂಬಾ ಪದವಿ ಪೂರ್ವ ಕಾಲೇಜ್, ಶಿರಸಿ ಇವರು ಪರಿಚಯಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಜಿ.ಎ ಹೆಗಡೆ ಸೋಂದಾ, ನಿವೃತ್ತ ಡೀನ್ ಹಾಗೂ ಯಕ್ಷಗಾನ ವಿದ್ವಾಂಸರು ಮತ್ತು ಅಂಕಣಕಾರರು ಇವರು ವಹಿಸಲಿದ್ದಾರೆ.
ಅತಿಥಿಗಳಾಗಿ ಭಾಗೀರಥಿ ಹೆಗಡೆ ಪ್ರಸಿದ್ಧ ಲೇಖಕಿ ಹಾಗೂ ಕಥೆಗಾರ್ತಿ ಹಾಗೂ ಡಾ| ಜಿ.ಎಸ್ ಹೆಗಡೆ ಪ್ರಾಚಾರ್ಯರು, ಅಳ್ಳಂಕಿ ಪದವಿಪೂರ್ವ ಕಾಲೇಜ್, ಹೊನ್ನಾವರ ಇವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಡಾ|| ಶಿವರಾಮ ಕೆ.ವಿ. ಖ್ಯಾತ ನೇತ್ರ ತಜ್ಞರು, ರವಿ ಹೆಗಡೆ ಗಡೀಹಳ್ಳಿ ಹಿರಿಯ ಸಮಾಜ ಸೇವಕರು, ಹಾಗೂ ಜಯಪ್ರಕಾಶ ಹಬ್ಬು ಖ್ಯಾತ ಲೇಖಕರು, ಹಾಗೂ ಕವಿಗಳು ಇವರ ಗೌರವ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮ ನಿರ್ವಹಣೆಯನ್ನು ವಿಜಯಾ ಶಾನಭಾಗ (ಶಿಕ್ಷಕಿ) ಇವರು ನಡೆಸಿಕೊಡಲಿದ್ದಾರೆ.
ನಾಡಭಕ್ತಿಗೀತೆಗಳ ಗಾಯನದಲ್ಲಿ ಭಾಗವಹಿಸುವವರು ಅಕ್ಟೊಬರ್ 28ರ ಒಳಗೆ ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಹೆಸರು ನೋಂದಾಯಿಸಲು ತಿಳಿಸಲಾಗಿದೆ. ಮೋ: ೭೩೪೯೦೪೮೪೪೧ ಅಥವಾ ೯೪೮೧೪೬೧೪೫೨
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



