ಯಶಸ್ವಿಯಾಗಿ ನಡೆದ ಕಲ್ಲೇಶ್ವರ ಪ್ರೌಢಶಾಲೆ ಶೈಕ್ಷಣಿಕ ಹಬ್ಬ
ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಲ್ಲೇಶ್ವರ ಇದರ ವಾರ್ಷಿಕ ಶೈಕ್ಷಣಿಕ ಹಬ್ಬ ಅತ್ಯಂತ ಯಶಸ್ವಿ ಯಾಗಿ ನೆರವೇರಿತು. ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರೌಢಶಾಲಾ ಅಧ್ಯಕ್ಷರಾದ ಶ್ರೀ ಶ್ರೀಧರ ಭಟ್ಟ ವಹಿಸಿದ್ದರು.
ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ವಿ ಎಸ್ ಭಟ್ಟ ಕಲ್ಲೇಶ್ವರ ಪ್ರಾಸ್ತಾವಿಕ ಮಾತನಾಡಿ ಶಾಲೆಯ ಅಭಿವೃದ್ಧಿ ಗೆ ಸಹಾಯ ಸಹಕಾರ ನೀಡಿದವರನ್ನು ಸ್ಮರಿಸಿ ಶಾಲೆ ನಡೆದು ಬಂದ ಇತಿಹಾಸವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿನೋದ ಭಟ್ಟ ಅಧ್ಯಕ್ಷರು ಗ್ರಾಂ. ಪಂ. ಡೋಂಗ್ರಿ, ಪ್ರಕಾಶ ಹೆಗಡೆ ಉದ್ದಿಮೆದಾರರು, ಮೋಹನ ಪಟಗಾರ ಗ್ರಾಂ ಪಂ ಸದಸ್ಯರು ಮಾತನಾಡಿದರು. ರಾಜು ಎನ್ ಹರಿಕಾಂತ ವಕೀಲರು, ಮಂಜುನಾಥ ಸಿದ್ದಿ, ರಾಮಕೃಷ್ಣ ಗಾಂವ್ಕರ ವೇದಿಕೆಯಲ್ಲಿ ಅಂಗನವಾಡಿಯ ಸ್ಮಿತಾ ಭಟ್ಟ ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



