ಕೆಡಿಸಿಸಿ ಚುನಾವಣೆ ಫಲಿತಾಂಶ ಪ್ರಕಟ: ಸತತ 6 ನೇ ಸಾರಿ ಶಿವರಾಂ ಹೆಬ್ಬಾರ್ ನಿರ್ದೇಶಕರಾಗಿ ಆಯ್ಕೆ
ಆಪ್ತ ನ್ಯೂಸ್ ಶಿರಸಿ:
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ನಡೆದಿದ್ದು, ಫಲಿತಾಂಶ ಒಂದೊಂದಾಗಿ ಪ್ರಕಟವಾಗುತ್ತಿದೆ. ಆಪ್ತ ನ್ಯೂಸ್ ಗೆ ಲಭ್ಯವಾದ ಮಾಹಿತಿಯಂತೆ ಶಿವರಾಂ ಹೆಬ್ಬಾರ್ ಬಣದ 10 ಜನರು ಜಯಗಳಿಸಿದ್ದಾರೆ. ಆದರೆ ಮಾಂಕಾಳ್ ವೈದ್ಯ ಬಣದ 3 ಜನರು ಜಯಗಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಮೂರು ಸ್ಥಾನಗಳ ಫಲಿತಾಂಶ ಬಾಕಿ ಇದೆ.
ಶಾಸಕ ಶಿವರಾಮ ಹೆಬ್ಬಾರ್ ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಅವರು ಸತತ 6 ನೇ ಸಾರಿ ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದಂತಾಗಿದೆ. ಹೆಬ್ಬಾರ್ ಅವರು ಜಯಗಳಿಸುತ್ತಿದ್ದಂತೆಯೇ ಅವರ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತ್ತು. ಹೆಬ್ಬಾರ್ ಅವರ ವಿರುದ್ಧ ನಿಂತಿದ್ದ ಗೋಪಾಲಕೃಷ್ಣ ಗಾಂವ್ಕಾರ್ ಅವರು ಸೋಲನ್ನು ಅನುಭವಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1



