ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಸ್ಥಿತಿಗತಿ ಯಾವ ಹಂತದಲ್ಲಿದೆ ಗೊತ್ತಾ? ಇಲ್ಲಿ ನೋಡಿ

ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡಲಿದೆ ಈ ವರದಿ.. ಪೂರ್ತಿ ಓದಿ

Jan 7, 2026 - 16:07
 0  230
ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಸ್ಥಿತಿಗತಿ ಯಾವ ಹಂತದಲ್ಲಿದೆ ಗೊತ್ತಾ? ಇಲ್ಲಿ ನೋಡಿ

ಆಪ್ತ ವಿಶೇಷ:

ಉತ್ತರ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಇನ್ನೊಂದು ಯೋಜನೆ ಅಘನಾಶಿನಿ-ವೇದಾವತಿ ನದಿ ಜೋಡಣಾ ಯೋಜನೆ. ಈ ಯೋಜನೆ ಯಾವ ಹಂತದಲ್ಲಿದೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
ಶಿರಸಿಯ ವೈದ್ಯರಾದ ಡಾ. ರವಿಕಿರಣ ಪಟವರ್ಧನ ಅವರು ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಗೆ ಪತ್ರ ಬರೆದಿದ್ದು, ಅವರಿಂದ ಉತ್ತರ ಬಂದಿದೆ. ಈ ಉತ್ತರದ ವಿವರಗಳು ಈ ಕೆಳಗಿನಂತಿದೆ.

ಅಘನಾಶಿನಿ–ವೇದಾವತಿ ಲಿಂಕ್ ಯೋಜನೆ ಕರ್ನಾಟಕ ರಾಜ್ಯದ ಅಂತರರಾಜ್ಯ (Intra State) ನದಿ ಜೋಡಣೆ ಯೋಜನೆಯಾಗಿದೆ. ಈ ಯೋಜನೆಯು ಮಳೆಗಾಲದಲ್ಲಿ ಪಶ್ಚಿಮಕ್ಕೆ ಹರಿಯುವ ಅಘನಾಶಿನಿ ನದಿಯ ಹೆಚ್ಚುವರಿ ನೀರಿನಲ್ಲಿ ಸುಮಾರು 994 MCM ಪ್ರಮಾಣದ ನೀರನ್ನು, ಪ್ರಸ್ತಾವಿತ ಹೇಮಗಣಿ ಬ್ಯಾರೇಜ್‌ನಿಂದ ತಿರುಗಿಸಿ, ವೇದಾವತಿ ಉಪ ಕಣಿವೆಯಲ್ಲಿನ ಈಗಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸಾಗಿಸುವುದನ್ನು ಉದ್ದೇಶಿಸಿದೆ. ಈ ನೀರನ್ನು ಕರ್ನಾಟಕದಲ್ಲಿ ಗೃಹಬಳಕೆ ಹಾಗೂ ನೀರಾವರಿ ಅಗತ್ಯಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.

ಈ ಲಿಂಕ್ ಯೋಜನೆಯ ಪೂರ್ವಸಾಧ್ಯತಾ ವರದಿ (Pre Feasibility Report – PFR) ಯನ್ನು NWDA ಸಂಸ್ಥೆಯು ಸಿದ್ಧಪಡಿಸುತ್ತಿದ್ದು, ವರದಿ ಪೂರ್ಣಗೊಂಡ ನಂತರ ಅದನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಜತ್‌ನಾನ್ ಕೆ.ಎಚ್ ಅವರು ಮಾಹಿತಿ ನೀಡಿದ್ದಾರೆ.\

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: http://www.nwda.gov.in ಇಲ್ಲಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0