ನ. 9 ರಂದು ಉತ್ತರ ಕನ್ನಡದ ಯುವ ಕವಿಗಳ ಪುಸ್ತಕ ಬಿಡುಗಡೆ
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡದ ಇಬ್ಬರು ಯುವ ಕವಿಗಳು ಹಾಗೂ ಆಪ್ತ ನ್ಯೂಸ್ ಬರಹಗಾರರಾದ ವಿನಯ್ ನಾಯ್ಕ್ ಮತ್ತು ಗಣೇಶ್ ನಾಯ್ಕ್ ಅವರುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮವು ೯ ನವೆಂಬರ್ ೨೦೨೫, ಭಾನುವಾರ ಬೆಳಿಗ್ಗೆ ೯:೦೦ ಗಂಟೆಯಿಂದ ಬೆಂಗಳೂರಿನ ಜೆ.ಎಸ್.ಎಸ್ ಜಯನಗರ ಹಾಲ್ ನಲ್ಲಿ ನಡೆಯಲಿದೆ.
ವಿನಯ್ ನಾಯ್ಕ್ ಅವರ ಅಷ್ಟಮುಖಿ ಎನ್ನುವ ಎಂಟು ಕಥೆಗಳ ಕಥಾ ಸಂಕಲನ ಬಿಡುಗಡೆ ಆಗುತ್ತಿದೆ. ಅದೇ ರೀತಿ ಗಣೇಶ್ ನಾಯ್ಕ್ ಅವರ ಭಾವಬುತ್ತಿ ಎನ್ನುವ ಕಥಾ ಸಂಕಲನ ಕೂಡ ಲೋಕಾರ್ಪಣೆ ಆಗುತ್ತಿದೆ. ಈ ಇಬ್ಬರೂ ಕವಿಗಳ ಪುಸ್ತಕಗಳನ್ನು ಅಕ್ಷರನಾದ ಪಬ್ಲಿಕೇಶನ್ ಪ್ರಕಟಿಸುತ್ತಿದೆ. ಈ ಇಬ್ಬರೂ ಕವಿಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0



