ಮಾಜಾಳಿಯಲ್ಲಿ ಸಿಕ್ಕ ಕೋಟಿ ಹಣಕ್ಕೆ ಮಾಲೀಕ ಯಾರು!?

Oct 28, 2025 - 15:35
 0  79
ಮಾಜಾಳಿಯಲ್ಲಿ ಸಿಕ್ಕ ಕೋಟಿ ಹಣಕ್ಕೆ ಮಾಲೀಕ ಯಾರು!?

ಆಪ್ತ ನ್ಯೂಸ್ ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಮಾಜಾಳಿ ಚೆಕ್‌ಪೋಸ್ಟ್ ಬಳಿ ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ₹1 ಕೋಟಿ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. ಚಿತ್ತಾಕುಲ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯು ಸೋಮವಾರ ರಾತ್ರಿ ನಡೆದಿದ್ದು, ಗೋವಾ-ಕಾರವಾರ ಗಡಿ ಪ್ರದೇಶದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ  ವಾಹನ ತಪಾಸಣೆಯ ಸಂದರ್ಭದಲ್ಲಿ ಈ ನಗದು ಪತ್ತೆಯಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಪೇಶ್ (ವಯಸ್ಸು 32, ಬೆಂಗಳೂರು) ಮತ್ತು ಬಮರ್ ರಾಮ್ (ವಯಸ್ಸು 28, ರಾಜಸ್ಥಾನ ಮೂಲದವರು) ಎಂಬ ಇಬ್ಬರು ವ್ಯಕ್ತಿಗಳ ಬಳಿ ದೊಡ್ಡ ಚೀಲದಲ್ಲಿ ₹500 ಮತ್ತು ₹200 ಮುಖಬೆಲೆಯ ನೋಟುಗಳ ರಾಶಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು ₹1,00,00,000 (ಒಂದು ಕೋಟಿ ರೂಪಾಯಿ) ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ.
“ಹಣದ ಮೂಲ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆರೋಪಿಗಳು ಹಾಜರುಪಡಿಸಿಲ್ಲ ಎನ್ನಲಾಗಿದೆ. ವಶ ಪಡಿಸಿಕೊಂಡ ಹಣ ಹವಾಲಾ ಅಥವಾ ರಾಜಕೀಯ ಉದ್ದೇಶಗಳಿಗೆ ಬಳಕೆಗೆ ಸಂಬಂಧಪಟ್ಟಿರಬಹುದೆಂದು ಶoಕಿಸಲಾಗಿದೆ. ಈ ನಡುವೆ ತೆರಿಗೆ ವಂಚಿಸಿದ ಹಣ ಎಂದೂ ಕೇಳಿಬರುತ್ತಿದೆ. ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0