ಪಂಚ ರಾಜ್ಯ ಚುನಾವಣಾ ಫಲಿತಾಂಶ: ದೀದಿ ಕೋಟೆಯಲ್ಲಿ ಅರಳಿದ ಕಮಲ; ತಮಿಳುನಾಡಿನಲ್ಲಿ 'ದಳಪತಿ' ಸುನಾಮಿ!

May 4, 2026 - 11:13
 0  140
ಪಂಚ ರಾಜ್ಯ ಚುನಾವಣಾ ಫಲಿತಾಂಶ: ದೀದಿ ಕೋಟೆಯಲ್ಲಿ ಅರಳಿದ ಕಮಲ; ತಮಿಳುನಾಡಿನಲ್ಲಿ 'ದಳಪತಿ' ಸುನಾಮಿ!

ಆಪ್ತ ನ್ಯೂಸ್ ನವದೆಹಲಿ:

ಭಾರಿ ಕುತೂಹಲ ಕೆರಳಿಸಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಭಾರಿಸುವತ್ತ ಹೆಜ್ಜೆ ಇಟ್ಟರೆ, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಎಂಟ್ರಿ ದ್ರಾವಿಡ ಪಕ್ಷಗಳಿಗೆ ನಡುಕ ಹುಟ್ಟಿಸಿದೆ.

೧. ಪಶ್ಚಿಮ ಬಂಗಾಳ: ದೀದಿ ನಾಡಲ್ಲಿ ಮೋದಿ ಮೋಡಿ

ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಲ್ಲಿ ಈ ಬಾರಿ ಕೇಸರಿ ಪಡೆ ಕೇಕೆ ಹಾಕಿದೆ. ಸರಳ ಬಹುಮತದ ಗಡಿ ದಾಟಿದ ಬಿಜೆಪಿ, ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಸಾಗಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಲ್ಲಿ ಶೂನ್ಯ ಸಂಪಾದನೆ ಮಾಡಿರುವುದು ಅಚ್ಚರಿ ಮೂಡಿಸಿದೆ.

ಪಕ್ಷ ಗೆದ್ದ ಸ್ಥಾನಗಳು
ಬಿಜೆಪಿ 181
ತೃಣಮೂಲ ಕಾಂಗ್ರೆಸ್ (ಟಿಎಂಸಿ) 110
ಎಡ ಪಕ್ಷಗಳು 01
ಕಾಂಗ್ರೆಸ್ 00

೨. ತಮಿಳುನಾಡು: ಡಿಎಂಕೆಗೆ ಆಘಾತ ನೀಡಿದ ದಳಪತಿ!

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಇದೊಂದು ದೊಡ್ಡ ಮೈಲಿಗಲ್ಲು. ಆಡಳಿತಾರೂಢ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ನಟ ದಳಪತಿ ವಿಜಯ್ ಭಾರೀ ಶಾಕ್ ನೀಡಿದ್ದಾರೆ. ಅವರ ಟಿವಿಕೆ (TVK) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮ್ಯಾಜಿಕ್ ಮಾಡಿದೆ.

  • ಟಿವಿಕೆ (ವಿಜಯ್): 107

  • ಎಐಎಡಿಎಂಕೆ: 78

  • ಡಿಎಂಕೆ: 47


೩. ಕೇರಳ: ಯುಡಿಎಫ್‌ ಭರ್ಜರಿ ಕಮಾಲ್

ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದ್ದು, ಎಲ್‌ಡಿಎಫ್‌ಗೆ ಭಾರೀ ಮುಖಭಂಗವಾಗಿದೆ. ಯುಡಿಎಫ್ ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಕಂಬ್ಯಾಕ್ ಮಾಡಿದೆ.

ಪ್ರಮುಖ ಅಂಕಿಅಂಶ:

  • ಯುಡಿಎಫ್: 85

  • ಎಲ್‌ಡಿಎಫ್: 42

  • ಇತರರು: 12

  • ಬಿಜೆಪಿ: 01


೪. ಅಸ್ಸಾಂ: ಮತ್ತೊಮ್ಮೆ ಹಿಮಂತ ಅಬ್ಬರ

ಈಶಾನ್ಯದ ಹೆಬ್ಬಾಗಿಲು ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಾಯಕತ್ವಕ್ಕೆ ಜನಮನ್ನಣೆ ಸಿಕ್ಕಿದೆ. ಬಿಜೆಪಿ ವಿರೋಧ ಪಕ್ಷಗಳನ್ನು ನಿರಾಯಾಸವಾಗಿ ಮಣಿಸಿ ಸತತ ಗೆಲುವಿನ ನಗೆ ಬೀರಿದೆ.

  • ಬಿಜೆಪಿ: 97

  • ಕಾಂಗ್ರೆಸ್: 26

  • ಎಯುಡಿಎಫ್‌: 02


೫. ಪುದುಚೆರಿ: ಎನ್‌.ಆರ್ ಕಾಂಗ್ರೆಸ್ ಮೇಲುಗೈ

ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಎನ್.ಆರ್ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆದ್ದು ಪ್ರಾಬಲ್ಯ ಮೆರೆದಿದೆ. ಇಲ್ಲೂ ಕೂಡ ವಿಜಯ್ ಅವರ ಟಿವಿಕೆ ಪಕ್ಷ ೪ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅಸ್ತಿತ್ವ ಸಾಬೀತುಪಡಿಸಿದೆ.

  • ಎನ್‌.ಆರ್ ಕಾಂಗ್ರೆಸ್: 17

  • ಟಿವಿಕೆ: 04

  • ಕಾಂಗ್ರೆಸ್: 03

  • ಇತರರು: 03


ಒಟ್ಟಾರೆ ವಿಶ್ಲೇಷಣೆ:

ಈ ಬಾರಿಯ ಪಂಚ ರಾಜ್ಯಗಳ ಚುನಾವಣೆ ಭಾರತೀಯ ರಾಜಕೀಯದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುತ್ತಿರುವುದರ ಸಂಕೇತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿರುವುದು ಹಾಗೂ ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಪ್ರಚಂಡ ಮುನ್ನಡೆ ಮುಂಬರುವ ದಿನಗಳಲ್ಲಿ ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0