ಸೀಮೆ ಎಣ್ಣೆಯಿಂದ ಸುಟ್ಟು ಗಂಭೀರ ಗಾಯಗೊಂಡ ಗಂಡ-ಹೆಂಡತಿ; ಕಾರಣ ನಿಗೂಢ, ಪೊಲೀಸ್ ತನಿಖೆ ಆರಂಭ

Jul 26, 2026 - 10:57
 0  98
ಸೀಮೆ ಎಣ್ಣೆಯಿಂದ ಸುಟ್ಟು ಗಂಭೀರ ಗಾಯಗೊಂಡ ಗಂಡ-ಹೆಂಡತಿ; ಕಾರಣ ನಿಗೂಢ, ಪೊಲೀಸ್ ತನಿಖೆ ಆರಂಭ

ಆಪ್ತ ನ್ಯೂಸ್ ಮುಂಡಗೋಡ:

ತಾಲೂಕಿನ ಬೊರನಗುಡ್ಡ ಗ್ರಾಮದಲ್ಲಿ ಸೀಮೆ ಎಣ್ಣೆಯಿಂದ ಗಂಡ-ಹೆಂಡತಿ ಸುಟ್ಟ ಗಾಯಗೊಂಡ ಘಟನೆ ನಡೆದಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಗಾಯಗೊಂಡವರನ್ನು ಕೃಷ್ಣ ಜಾದವ ಹಾಗೂ ಅವರ ಪತ್ನಿ ಜ್ಯೋತಿ ಕೃಷ್ಣ ಜಾದವ ಎಂದು ಗುರುತಿಸಲಾಗಿದೆ. ಇಬ್ಬರೂ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೀಮೆ ಎಣ್ಣೆಯಿಂದ ಬೆಂಕಿ ಹೇಗೆ ಹೊತ್ತಿಕೊಂಡಿತು ಹಾಗೂ ಯಾವ ಸಂದರ್ಭದಲ್ಲಿದು ಸಂಭವಿಸಿತು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಘಟನೆ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ಆರಂಭಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಬಳಿಕವೇ ಘಟನೆಯ ನಿಖರ ಕಾರಣ ಬೆಳಕಿಗೆ ಬರಲಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0