ಬಳಗಾರದಲ್ಲಿ ಭಗವದ್ಗೀತೆ ಸಪ್ತಾಹಕ್ಕೆ ಚಾಲನೆ
ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಗ್ರಾಮದ ಬಳಗಾರ ಮಜರೆಯ ಶ್ರೀಕಾಂತ ಸದಾನಂದ ಹೆಗಡೆಯವರ ಮನೆಯಲ್ಲಿ ಭಗವದ್ಗೀತೆ ಸಪ್ತಾಹಕ್ಕೆ ಮುಖ್ಯ ಅರ್ಚಕರಾದ ಶಂಕರ ಆಳ್ಕೆಯವರು ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.
ಶ್ರೀಭಗವದ್ಗೀತಾ ಅಭಿಯಾನ- ಕರ್ನಾಟಕ,ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ(ರಿ) ಶಿರಸಿ(ಉ.ಕ) ಇವರ ಮಾರ್ಗದರ್ಶನದಲ್ಲಿ ಭಗವದ್ಗೀತೆಯ 11ನೇಯ ಅಧ್ಯಾಯದ ಪಠಣ ನಡೆಯಲಿದೆ. ಬಳಗಾರ ಮಜರೆಯ ಮಾತೆಯರು, ಭಕ್ತವೃಂದದವರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



