'ತೇಲಿ ಬಿಟ್ಟ ಆತ್ಮಬುಟ್ಟಿ' ಕವನ ಸಂಕಲನಕ್ಕೆ ಶಿಭಾ ಕಾವ್ಯ ಪುರಸ್ಕಾರ
ಆಪ್ತ ನ್ಯೂಸ್ ಶಿರಸಿ:
ಕವಿ, ಕಥೆಗಾರ, ವಿಮರ್ಶಕ ಡಾ. ಅಜಿತ್ ಹರೀಶಿ ಅವರ 'ತೇಲಿ ಬಿಟ್ಟ ಆತ್ಮಬುಟ್ಟಿ' ಕವನ ಸಂಕಲನವು 2026 ರ ಶಿಭಾ ಕಾವ್ಯ ಪುರಸ್ಕಾರವನ್ನು ಪಡೆದುಕೊಂಡಿದೆ. ಸಾಹಿತ್ಯ ಸೌರಭ, ವಡಗೋಲ, ಬೆಳಗಾವಿ ನೀಡುವ ಪ್ರಶಸ್ತಿ ಇದಾಗಿದೆ. ಬೆಳಗಾವಿ ಜಿಲ್ಲಾ ಸಾಹಿತ್ಯ ಭವನದಲ್ಲಿ, ಮೇ ಒಂದರಂದು ನಡೆಯುವ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಇದನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0