ದಬಗಾರದಲ್ಲಿ ಕೃಷಿ ಕೂಲಿಕಾರನಿಗೆ ಸನ್ಮಾನ

Oct 26, 2025 - 16:10
 0  33
ದಬಗಾರದಲ್ಲಿ ಕೃಷಿ ಕೂಲಿಕಾರನಿಗೆ ಸನ್ಮಾನ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಮೇಲಿನ ದಬಗಾರ ದಲ್ಲಿ ಕೃಷಿ ಕೂಲಿಕಾರ ಶಂಕರ ಗಣಪಯ್ಯ ಪಟಗಾರ ಯರಮುಖ ಇವರನ್ನು ಆತ್ಮೀಯ ವಾಗಿ ದಬಗಾರದ ಸುಬ್ರಾಯ ನರಸಿಂಹ ದಬಗಾರ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ಶಂಕರ ಪಟಗಾರ ಕುಟುಂಬ ಯರಮುಖದಲ್ಲಿ ಮನೆ ಮಾಡಿಕೊಂಡು ಸುತ್ತಮುತ್ತಲು ಹಳ್ಳಿಗಳಲ್ಲಿ ಕೃಷಿ ಕೂಲಿ ಮಾಡುತ್ತಾ ಕಳೆದ ಐವತ್ತು  ವರ್ಷಗಳಿಂದ ವಾಸವಾಗಿದೆ. ಕುಮಟಾ ತಾಲೂಕಿನಿಂದ ಚಿಕ್ಕಂದಿನಿಂದಲೇ ಗುಂದ ಊರಿಗೆ ಬಂದು ಕೆಲಸ ಮಾಡುತ್ತಾ ಊರಿನಲ್ಲಿ ಎಲ್ಲರ ಪ್ರೀತಿ ಗಳಿಸಿದವರು ಸುಮಾರು ಐವತ್ತು ವರ್ಷ ಗಳಿಂದ ಇಲ್ಲಿ ಸ್ಥಳೀಯರಂತೆ ಎಲ್ಲರೊಂದಿಗೆ ಬೆರೆಯುತ್ತಾ ಯಾರಲ್ಲೂ ಒಮ್ಮೆಯೂ ಜಗಳ ಗಲಾಟೆ ಮಾಡಿಕೊಂಡವರಲ್ಲ. ಈಗ ಇಳಿ ವಯಸ್ಸಿನಲ್ಲೂ ನಗುಮೊಗದಿಂದಲೇ ಕೃಷಿ ಕಾರ್ಯ ಮಾಡುತ್ತಿದ್ದಾರೆ.
ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಇಬ್ಬರಿಗೂ ಮದುವೆ ಮಾಡಿದ್ದಾರೆ, ಮೂವರು ಮೊಮ್ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದು ಎಲ್ಲದಕ್ಕೂ ಪತ್ನಿ ಬೈರಿ ಅವರ ಸಹಕಾರವಿದೆ. ಮೊದಲನೇ ಮಗ ವಿನಾಯಕ ಸಹಕಾರಿ ಸಂಘದ ನಿರ್ದೇಶಕರು ಜೊತೆಗೆ ಕೃಷಿ ಕೆಲಸಕ್ಕೆ ಟೈಮ್ ಗೆ ಹಾಜರಾಗುತ್ತಾರೆ. ಎರಡನೇ ಮಗ ರಾಜು ಕೂಡ ಯಾವುದೇ ಕೆಲಸಕ್ಕೆ ವೇಳೆಗೆ ರೆಡಿ ಆಗುವ ಮೂಲಕ ತಂದೆ ತಾಯಿ ಅವರಿಗೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಹಲವು ಕುಟುಂಬದವರ ಕೆಲಸ ಕಾರ್ಯಗಳು ಸುಲಭ ವಾಗಿ ಸಾಗುತ್ತಿವೆ.
ಮುಂದಿನ ದಿನಗಳಲ್ಲಿ ಕೃಷಿ ಕೆಲಸ ಗಳಿಗೆ ಕೂಲಿ ಆಳುಗಳ ಸಮಸ್ಯೆ ಉಂಟಾಗುವ ದಿನಗಳು ದೂರವಿಲ್ಲ. ಹಾಗಾಗಿ ಇರುವ ಕೃಷಿಕೂಲಿಗಾರರನ್ನು ಗೌರವಿಸಿ ಅವರೂ ಸಮಾಜದ ಒಂದು ಅಂಗ ಎನ್ನುವ ಕಲ್ಪನೆಯನ್ನು ಅವರಿಗೆ ಮತ್ತು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಶಂಕರ ಪಟಗಾರ ಅವರಿಗೆ ಗೌರವಿಸುವ ಮೂಲಕ ಕೃಷಿ ಕೂಲಿ ಕಾರ್ಮಿಕರನ್ನು ಗೌರವಿಸಲಾಗಿದೆ ಎಂದು, ಸುಬ್ರಾಯ ದಬಗಾರ ಹೇಳುತ್ತಾರೆ. ಈ ಗೌರವಕ್ಕೆ ಶಂಕರ ಪಟಗಾರ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0