ದೇವಸ್ಥಾನದ ಮರುನಿರ್ಮಾಣಕ್ಕೆ ಬ್ಯಾಗದ್ದೆ ಊರಿನವರ ಜೊತೆ ಅನಂತಮೂರ್ತಿ ಸಂಕಲ್ಪ

Feb 10, 2026 - 13:12
 0  57
ದೇವಸ್ಥಾನದ ಮರುನಿರ್ಮಾಣಕ್ಕೆ ಬ್ಯಾಗದ್ದೆ ಊರಿನವರ ಜೊತೆ ಅನಂತಮೂರ್ತಿ ಸಂಕಲ್ಪ

ಆಪ್ತ ನ್ಯೂಸ್‌ ಶಿರಸಿ:

ತಾಲೂಕಿನ ಬ್ಯಾಗದ್ದೆಯಲ್ಲಿ ಸಮಸ್ತ ಊರವರ ಸಹಕಾರದಲ್ಲಿ ಸೋದೆ ಅರಸರ ಕಾಲದ ಸುಮಾರು 500 ವರ್ಷಕ್ಕೂ ಅಧಿಕ ಕಾಲದ ಇತಿಹಾಸ ಇರುವ ಶ್ರೀ ಉಮಾಮಹೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ಊರ ಹಿರಿಯರ ಸಮ್ಮುಖದಲ್ಲಿ ಭಾನುವಾರದ ಶುಭಮುಹೂರ್ತದಲ್ಲಿ ಭೂಮಿಪೂಜೆ ನಡೆಸಿದರು.

ಕಳೆದ ಸುಮಾರು ಒಂದೂ ಶತಮಾನಕ್ಕೂ ಅಧಿಕ‌ ಸಮಯದಿಂದ ದೇವಾಲಯದ ಪುನರ್ ನಿರ್ಮಾಣಕ್ಕೆ ಊರವರು ಪ್ರಯತ್ನ ನಡೆಸುತ್ತಿದ್ದರೂ, ಅದು ಕೈಗೂಡದೇ ಹಾಗೆಯೇ ಉಳಿದಿತ್ತು. ದೇವಾಲಯವೂ ಸಹ ಹಂತ ಹಂತವಾಗಿ ಶಿಥಿಲಗೊಂಡಿತ್ತು. ಇದೀಗ ಅನಂತಮೂರ್ತಿ ಹೆಗಡೆ ಅವರು ತಮ್ಮ ಹುಟ್ಟೂರಿನ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಊರಿನ ಸಮಸ್ತ ನಾಗರಿಕರ ಸಹಕಾರದಿಂದ ನೇತೃತ್ವ ವಹಿಸಿದ್ದಾರೆ.
ಶಕ್ತಿಪೀಠ ಎನಿಸಿರುವ ಈ ಸ್ಥಳದಲ್ಲಿ ಶೀಘ್ರ ಪ್ರಸಾದ ಸ್ವರೂಪಿ ಉಮಾಮಹೇಶ್ವರ ದೇವರ ಜೊತೆಗೆ ಪಾರ್ವತಿ ದೇವಿ, ಗಣಪತಿ, ಲಕ್ಷ್ಮೀನಾರಾಯಣ, ಆಂಜನೇಯ ದೇವರನ್ನು ಒಳಗೊಂಡು ಪಂಚ ದೇವತೆಗಳ ಸಾನಿಧ್ಯವಿದೆ. ಮಹಾಶಿವರಾತ್ರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೂ ಇಲ್ಲಿ ನಡೆಯುತ್ತಿದ್ದು, ಸ್ಥಳೀಯವಾಗಿ ಭಕ್ತರ ಮನದಾಸೆಯನ್ನು ಈಡೇರಿಸುವ ಉಮಾಮಹೇಶ್ವರ ದೇವರ ದೇವಾಲಯದ ಪುನರ್ ನಿರ್ಮಾಣಕ್ಕೆ ಇದೀಗ ಕಾಲ ಕೂಡಿಬಂದಿದ್ದು, ಭಕ್ತರು, ಸ್ಥಳಿಕರು ಅತೀವ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

*****
ನನ್ನ ಹುಟ್ಟೂರಿನಲ್ಲಿ ದೇವಾಲಯ ನಿರ್ಮಾಣಕ್ಕೆ ಅವಕಾಶ ಒದಗಿ ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯದಿಂದಾಗಿದೆ. ಇದರಂತಹ ಪುಣ್ಯದ ಕೆಲಸ ಇನ್ನೊಂದಿಲ್ಲ. ಅದೇಷ್ಟೇ ವಿಘ್ನಗಳು ಎದುರಾದರೂ, ಊರವರ ಸಹಕಾರ, ನೆರವಿನಿಂದ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ನಾನು ಕಟಿಬದ್ಧನಾಗಿದ್ದೇನೆ.

-- ಅನಂತಮೂರ್ತಿ ಹೆಗಡೆ

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0