ಪಟ್ಟಣ ಪಂಚಾಯತ್ ಜಾಗವನ್ನು ಉರ್ದು ಶಾಲೆಗೆ ಕೊಡುವ ಹುನ್ನಾರ: ಬಿಜೆಪಿ ಪ್ರತಿಭಟನೆ 

May 27, 2026 - 15:19
 0  106
ಪಟ್ಟಣ ಪಂಚಾಯತ್ ಜಾಗವನ್ನು ಉರ್ದು ಶಾಲೆಗೆ ಕೊಡುವ ಹುನ್ನಾರ: ಬಿಜೆಪಿ ಪ್ರತಿಭಟನೆ 

ಆಪ್ತ ನ್ಯೂಸ್‌ ಸಿದ್ದಾಪುರ:

ಸಿದ್ದಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಗೆ  ಒಳಪಡುವ ಉರ್ದು ಶಾಲೆ ಕಟ್ಟಡ ಶಿಥಿಲಾವಸ್ತೆಗೆ ತಲುಪಿದ್ದು ಈಗಾಗಲೇ 22 ಲಕ್ಷ ನಲ್ಲಿ ಸರ್ಕಾರ ತಡೆಗೋಡೆಯನ್ನು ನಿರ್ಮಿಸಲು ಹೊರಟಿದೆ ಕಟ್ಟಡ ಅಭದ್ರವಾಗಿರುವ ಕಾರಣ ತಡೆಗೋಡೆ ನಿರ್ಮಿಸಿದಂತೆ ಸಿದ್ದಾಪುರ ಬಿಜೆಪಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದು ಆ ಜಾಗವನ್ನು ಸಿದ್ದಾಪುರ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಬೇಕು. ಈಗಾಗಲೇ ಆ ಜಾಗದಲ್ಲಿ ಶಾಲೆ ನಡೆಯುತ್ತಿಲ್ಲ. ಮತ್ತೆ ಅದೇ ಜಾಗದಲ್ಲಿ ಪ್ರಾರಂಭಿಸುವ ಅವಶ್ಯಕತೆ ಇಲ್ಲ. ಶಾಲಾ ಮಕ್ಕಳನ್ನು ಬೇರೆಡೆಗೆ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಬೇಕು, ಒಂದುವೇಳೆ ತಡೆಗೋಡೆ ನಿರ್ಮಿಸಿ ಶಾಲೆ ಪ್ರಾರಂಭಿಸಿ ಏನಾದರೂ ಅನಾಹುತಗಳು ನಡೆದರೆ ಅದಕ್ಕೆ ಶಾಸಕರು, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು, ತಹಸೀಲ್ದಾರ್ ರು  ನೇರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಪ್ರತಿಭಟನೆ ಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತೋಟಪ್ಪ ನಾಯ್ಕ್,  ಅನಂತಮೂರ್ತಿ ಹೆಗಡೆ, ನಂದನ್ ಬೋರ್ಕರ್, ಮಾರುತಿ ನಾಯ್ಕ್ ಹೊಸೂರ್ ಮುಂತಾದವರು ಮಾತನಾಡಿ ವಿರೋಧ ವ್ಯಕ್ತಪಡಿಸಿದರು. ಕೆಲ ಸಮಯ ಪ್ರತಿಭಟನಕಾರರು ತಹಸೀಲ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0