ವಿಷ ಸೇವಿಸಿ ಆತ್ಮಹತ್ಯೆ

Nov 16, 2025 - 19:53
 0  57
ವಿಷ ಸೇವಿಸಿ ಆತ್ಮಹತ್ಯೆ

ಆಪ್ತ ನ್ಯೂಸ್‌ ಬನವಾಸಿ:

ಬನವಾಸಿಯ ಹೂವಿನ ಕೊಪ್ಪಲ ಕೇರಿಯ ಗಣೇಶ ಬಾವೇರ (40) ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈತ ಮನೋರೋಗ ಮತ್ತು ಕುಟುಂಬ ಸಮಸ್ಯೆಯಿಂದ ಬಳಲುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕೆಲವು ಕಾಲದಿಂದ ಅವರ ಪತ್ನಿ ಮತ್ತು ಮಕ್ಕಳು ದಾವಣಗೆರೆಯಲ್ಲಿ ವಾಸಿಸುತ್ತಿದ್ದರು. ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡ ಗಣೇಶ ಮದ್ಯಪಾನಕ್ಕೆ ಶರಣಾಗಿದ್ದ.

ನವೆಂಬರ್‌ ೧೦ರಂದು ಈತ ಮನೆಯಲ್ಲಿ ಕಳೆನಾಶಕ ಔಷಧಿ ಸೇವಿಸಿ ಅಸ್ವಸ್ಥರಾಗಿದರು. ತಕ್ಷಣ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಣೇಶ್‌ ನಿಧನರಾದರು.

ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0