ವಿಧವೆಗೆ ಮದುವೆ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡಿ ವಂಚಿಸಿದ ಯುವಕನ ವಿರುದ್ಧ ದೂರು

Feb 12, 2026 - 08:33
 0  241
ವಿಧವೆಗೆ ಮದುವೆ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡಿ ವಂಚಿಸಿದ ಯುವಕನ ವಿರುದ್ಧ ದೂರು

ಆಪ್ತ ನ್ಯೂಸ್ ಶಿರಸಿ:

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ ವಂಚಿಸಿದ ಘಟನೆ ಶಿರಸಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಿರಣ ಶಾಂತಾರಾಮ ಮೊಗೇರ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ:

ಕಾರವಾರ ಮೂಲದ ಮಹಿಳೆಯೊಬ್ಬರಿಗೆ ಈಗಾಗಲೇ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದರು. ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತಿದ್ದ ಈಕೆಗೆ 2023ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಶಿರಸಿ ತಾಲೂಕಿನ ಬರೂರು ಗ್ರಾಮದ ಅರಸೀಕೇರಿಯ ಕಿರಣ ಎಂಬಾತನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಕಿರಣ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ.

ಮೂರು ವರ್ಷಗಳ ಕಾಲ ನಿರಂತರ ಶೋಷಣೆ:

ದೂರಿನಲ್ಲಿ ಉಲ್ಲೇಖಿಸಿರುವಂತೆ, ಕಿರಣ 2023ರ ನವೆಂಬರ್‌ನಲ್ಲಿ ಮಹಿಳೆಯನ್ನು ತನ್ನ ಗ್ರಾಮವಾದ ಅರಸೀಕೇರಿಗೆ ಕರೆತಂದಿದ್ದನು. ಅಂದಿನಿಂದ 2026ರ ಜನವರಿ 31ರ ವರೆಗೆ "ನಾವು ದಂಪತಿಗಳಂತೆ ಬಾಳೋಣ, ಶೀಘ್ರವೇ ಮದುವೆಯಾಗೋಣ" ಎಂದು ನಂಬಿಸಿ ಆಕೆಯೊಂದಿಗೆ ನಿರಂತರವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ.

ಮೋಸ ಬಯಲಾದದ್ದು ಹೇಗೆ?

ಮಹಿಳೆ ತನ್ನ ಭವಿಷ್ಯ ಮತ್ತು ಮಕ್ಕಳ ಹಿತದೃಷ್ಟಿಯಿಂದ ಮದುವೆಯಾಗುವಂತೆ ಕಿರಣನ ಮೇಲೆ ಒತ್ತಡ ಹೇರಿದಾಗ ಆತನ ಅಸಲಿ ಬಣ್ಣ ಬಯಲಾಗಿದೆ. ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಅಸಭ್ಯ ಪದಗಳಿಂದ ನಿಂದಿಸಿ ಮನೆಯಿಂದ ಹೊರಹಾಕಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0