ಮಾನವನಾಗಿ ಬದುಕಲು ಕಲಿಯಿರಿ ಎಂದು ದೇಶಪಾಂಡೆ ಹೇಳಿದ್ಯಾಕೆ ಗೊತ್ತಾ
ಆಪ್ತ ನ್ಯೂಸ್ ಜೋಯಿಡಾ:
ಜೋಯಿಡಾ ತಾಲೂಕಿನ ತ್ರೈಮಾಸಿಕ ಅಭಿವೃದ್ಧಿ ಪರಿಶೀಲನಾ ಸಭೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ರಾಜ್ಯ ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಶಾಸಕರು ಆದ ಆರ್ ವಿ ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅಧಿಕಾರಿಗಳಲ್ಲಿ ನಯ ವಿನಯತೆ ಮತ್ತು ಕೆಲಸ ಮಾಡುವ ಗುಣಗಳಿರಬೇಕು, ಮೊದಲು ಮಾನವನಾಗಿ ಬದುಕಲು ಕಲಿಯಬೇಕು. ತಾಲೂಕಿನ ಅಧಿಕಾರಿಗಳು ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಹೇಳುವುದಲ್ಲ, ಕೆಲಸ ಮಾಡಿದ ಪ್ರಗತಿ ಹೇಳಬೇಕು. ಸರಕಾರ ಒಂದು ಕೆಲಸಕ್ಕೆ ಹಣ ವೇಳೆ ನಿಗದಿ ಪಡಿಸಿದಾಗ ಸರಿಯಾದ ವೇಳೆಗೆ ಕೆಲಸ ಮುಗಿಸಬೇಕು ಹಾಗಾಗಿ ತಹಶೀಲ್ದಾರ್ ಮತ್ತು ಇಓ ಅವರು ಪ್ರತಿ ತಿಂಗಳು ಎಲ್ಲ ಇಲಾಖೆಯವರೊಂದಿಗೆ ಸಭೆ ನಡೆಸಿ ಪ್ರಗತಿ ಸಾಧಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಮುಂದಿನ ಸಭೆವರೆಗೂ ಎಳೆಯಬಾರದು, ಬರುವ ಅನುದಾನ ಬೇಗ ಬಳಕೆ ಮಾಡಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆಯವರು ಸ್ಥಳೀಯರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು, ಕುಡಿಯುವ ನೀರಿನ ಇಲಾಖೆ ಆರೋಗ್ಯ ಇಲಾಖೆಗಳು ಜನರಿಗೆ ಅಗತ್ಯ ಸೇವೆನೀಡುವಲ್ಲಿ ಮಾಡುವ ಕೆಲಸ ಸಮಾಧಾನಕರವಾಗಿಲ್ಲ. ನೀವು ಜನ ಮೆಚ್ಚುವ ಹಾಗೆ ಕೆಲಸ ಮಾಡಿದರೆ ಮಾತ್ರ ಸರಕಾರಕ್ಕೆ ನಮಗೆ ಹೆಸರು ಬರುತ್ತದೆ ಎಂದರು.
ಈ ಹಿಂದೆ ಬರುತ್ತಿದ್ದ ಶಿರಸಿ-ಉಳವಿ ಬಸ್ ಈಗ ಯರಮುಖದವರೆಗೂ ಬರಲಿ ಮತ್ತು ರಾತ್ರಿ ತಮ್ಮಣಿಗೆಗೆ ಬರುವ ಬದಲಿಗೆ ಮದ್ಯಾಹ್ನ ಬಸ್ ತಮ್ಮಣಿಗೆಗೆ ಬಿಡಲು ದಾಂಡೇಲಿ ಡಿಪೋ ವ್ಯವಸ್ಥಾಪಕರಿಗೆ ತಿಳಿಸಿದರು. ಗುಂದ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಅವರ ಬೇಡಿಕೆಯಂತೆ ಗುಂದ ಆಸ್ಪತ್ರೆಗೆ ಕೂಡಲೇ ಡಾಕ್ಟರ್ ರನ್ನು ನೇಮಿಸುವಂತೆ ಕಾರವಾರದ ಡಿಎಚ್ಓ ರವರಿಗೆ ತಿಳಿಸಿದಾಗ ಸಭೆ ಮುಗಿಯುವ ಮೊದಲೇ ಡಾಕ್ಟರ್ ನೇಮಕದ ಆದೇಶ ಶಾಸಕರಿಗೆ ತಲುಪಿತು.
ಚರ್ಚೆಯಲ್ಲಿ ಪ್ರಮುಖರಾದ, ವಿನಯ್ ದೇಸಾಯಿ, ಅರುಣ ದೇಸಾಯಿ, ಮಂಗೇಶ್ ಕಾಮತ, ಸಂಜಯ ಹಣಬರ್ ಇತರರು ಭಾಗವಹಿಸಿದ್ದರು. ಎಲ್ಲ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿದಿಗಳು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



